ಆರಂಭವು

ಶ್ರೀ ಹನುಮದ್ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (ರಿ .೧೩೫/೨೦೨೦),

     ೩೧ ಕೋಟಿ ವರ್ಷಗಳ ಆಧ್ಯಾತ್ಮಿಕ ಪೌರಾಣಿಕ,ರ್ ಸಾಂಸ್ಕ್ರುತಿಕ, ನಾಗರಿಕತೆಗಳೆಗೆ ಐತಿಹಾಸಿಕ ಮಹಾಸಾಮ್ರಾಜ್ಯಗಳ ಐತಿಹಾಸಿಕ ರಾಜಧಾನಿಯಾಗಿ ಭವ್ಯ ಚರಿತ್ರ ಉಳ್ಳ  ಈ ದಿವ್ಯ ಭೂಮಿ ಶ್ರೀ ಪಂಪಾವಿರೂಪಾಕ್ಷ ದೇವರು ನೆಲಿಸಿದಂತಹ  ಪುಣ್ಯ ಭೂಮಿ ಪಂಪಾಕ್ಶೇತ್ರವಾಗಿ  ಸಪ್ತಋಷಿಗಳ  ಸಾನ್ನಿಧ್ಯದಿಂದ, ಸತ್ಯಸಂಧ ನಾದ ಸತ್ಯಹರಿಶ್ಚಂದ್ರನ, ತ್ರೇತಾಯುಗದಲ್ಲಿ ದರ್ಮಮೂರ್ತಿ ಆದ ಶ್ರೀರಾಮಚಂದ್ರ ನಡೆಯಾಡಿ ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದ ಧರ್ಮ ಭೂಮಿಯಾಗಿ,
ಶ್ರೀ ಜಾಂಬವಂತ, ಸುಗ್ರೀವ, ಶ್ರೀ ಹನುಮ, ಅಂಗದಾದಿ ಮಹಾಭಾಗವತರ ಜನ್ಮಸ್ಥಲವಾಗಿ    ಹೇಮಕೂಟ, ಅಂಜನಾದ್ರಿ, ಋಷ್ಯಮೂಕ, ಮಾತಂಗ, ಗಂಥಮಾದನ ಪರ್ವತಗಳ ಪವಿತ್ರ “ಕಿಷ್ಕಿಂಧಾ ಸಾಮ್ರಾಜ್ಯ” ಭಕ್ತಿಭೂಮಿ ಆಗಿ ದ್ವಾಪರಯುಗದಲ್ಲಿ ಪಂಚಪಾಂಡವರನ್ನು ಪುನೀತಗೊಳಿಸಿದ ಪುಣ್ಯಭೂಮಿ ಆಗಿ ಕಲಿಯುಗದಲ್ಲಿ ಭಗವಾನ್ ವೇದವ್ಯಾಸರ, ಶ್ರೀ ವಿದ್ಯಾರಣ್ಯರ ವಿದ್ಯಾ, ವಿಜಯನಗರ ಸಾಮ್ರಾಜ್ಯ  ಆಧ್ಯಾತ್ಮಿಕ ಭೂಮಿ ಆಗಿ , ಶ್ರೀ ಕಷ್ಣದೇವರಾಯರ  ಕರ್ಮ ಭೂಮಿಯಾಗಿ ಪ್ರಸಿದ್ಧಿಹೊಂದಿದ ಈ ಪವಿತ್ರಕ್ಷೇತ್ರವು ಪ್ರಸ್ತುತ ಕಲಿಯುಗ ಪ್ರಭಾವದಿಂದ ಕಣ್ಮರೆಯಾಗಿರುವ ಪೂರ್ವವೈಭವವನ್ನು ಭಗವಂತನ ಪ್ರೇರಣಾ, ಸಂಕಲ್ಪಗಳಿಂದ ಭವಬಂಧನಗಳಿಂದ ಮುಕ್ತಿಯನ್ನು ಅನುಗ್ರಹಿಸುವ ಭಗವಂತನೇ ಲಕ್ಷ್ಯವಾಗಿ, ಅದರ ಸಾಧನೆ ಭಕ್ತಿಯಾಗಿ ಮಹಾಭಾಗವತರ ನಡೆದಿರುವ  ದಾರಿಯಲ್ಲಿ ಸಮಸ್ಥ ಭಗವದ್ಭಕ್ತರಗಾಗಿ ಭಗವಂತನೆಯಿಂದ ನಿರ್ಮಿತವಾಗಿ  ತನ್ನ ೩೧ ಕೋಟಿ ವರ್ಷಗಳ ಪೂರ್ವ ವೈಭವವನ್ನು  ಮತ್ತೆ ಹಿಂತರಲು ಈ ೩೧ ಕೋಟಿ ಸಂ|| ಪಂಪಾಕ್ಷೇತ್ರ ೧೭ ಸಂ|| ಕಿಷ್ಕಿಂಧಾ ಸಾಮ್ರಾಜ್ಯ ೬೦೦ ಸಂ|| ವಿದ್ಯಾ, ವಿಜಯನಗರ ಸಾಮ್ರಾಜ್ಯ ರಾಜಧಾನಿ ಆದಈ ಪಾವನ ಪುಣ್ಯ  ಭೂಮಿ ಯ ಜೀರ್ಣ್ಣೊದ್ಧಾರ ಕಾರ್ಯಕ್ರಮವು ಆ ಪರಮಾತ್ಮನ ಪ್ರೇರಣೆಯಿಂದ ಜಗದ್ಗುರುಗಳವರ ಆಶೀರ್ವಾದದಿಂದ ಪರಮಪೂಜ್ಯ ಶ್ರೀ ಶ್ರೀ ಶ್ರಿ ಗೋವಿಂದಾನಂದ ಸರಸ್ವತೀ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ೧೫ ಸಂ ಹಿಂದೆ  ಆರಂಭವಾಗಿ

ತ್ರೇತಾಯುಗದಲ್ಲಿ ಯಾವಧರ್ಮ ಮೂರ್ತಿ ಧರ್ಮ ಸ್ಥಾಪನೆಕ್ಕಾಗಿ ಅಯೋಧ್ಯೆಯಿಂದ ಕಿಷ್ಕಿಂದೆ ಗೆ ಬಂದು ಜಾಂಬವಂತ, ವಾಲಿ,ಸುಗ್ರೀವ, ಹನುಮಂತ, ಅಂಗದ ಶಬರೀ ಇತ್ಯಾದಿ ಮಹಾಭಾಗವತರನ್ನು ಉದ್ದರಿಸಿ  ಅವರ ಪ್ರಿಯವಾದ ಶ್ರೀ ಹನುಮಂತರನ್ನು ಚಿರಂಜೀವಿ ಯಾಗಿ, ಭವಿಷ್ಯದ್ ಬ್ರಹ್ಮ ಯಾಗಿ  ಅನುಗ್ರಹಿಸಿದ  ಶ್ರೀ ರಾಮದೂತನಾದ ಶ್ರೀ ಹನುಮಂತನ ಜನ್ಮಸ್ಥಳವಾದ  ಈ ಪುಣ್ಯಭೂಮಿದಲ್ಲಿ ತುಂಗಭದ್ರಾ ನದೀ, ಪಂಪಾಸರೋವರ ತಟದಲ್ಲಿ ಪವನ ಸುತ, ಅಂಜನಾ ಪುತ್ರ ಶ್ರೀ ಹನುಮಂತನ ೨೧೫ ಮೀಟರ್ ದಿವ್ಯ ವಿಗ್ರಹ ನಿರ್ಮಾಣವು ಭವಿಷ್ಯದ್ ಬ್ರಹ್ಮಗೆ ಭಗವಂತನ ಸ್ಫುರಣೆಯಿಂದ ಭಾಗವತ ಭಕ್ತಾದಿಗಳ ಭಕ್ತಿದಿಂದ  ‘ ೨೧೫ ’ ಮೀಟರ್ “ಭಕ್ತಿ ವೈಭವ” ವಿಗ್ರಹ ಪ್ರಪಂಚದಲ್ಲಿ ಅತಿಎತ್ತರದ ಶ್ರೀ ಹನುಮದ್ ವಿಗ್ರಹ ಶ್ರೀ ಹನೂಮಂತನ ಜನ್ಮಸ್ಥಳವಾದ ಶ್ರೀ ಪಂಪಾಕ್ಷೇತ್ರ ಕಿಷ್ಕಿಂಧೆ ಯಲ್ಲಿ, ಅರ್ಪಿಸುವ ಭಕ್ತಿ ಪುಷ್ಪಾಂಜಲಿ